ಅಮರನಾಥ ಯಾತ್ರೆಗೆ ತೆರಳಿದ್ದ ರಾಮನಗರ ಜಿಲ್ಲೆಯ ಎಲ್ಲಾ 20 ಮಂದಿ ಸೇಫ್

ರಾಮನಗರ: ಜಿಲ್ಲೆಯಿಂದ ಅಮರನಾಥ ಯಾತ್ರೆಗೆ ತೆರಳಿದ್ದ 20 ಮಂದಿ ಯಾತ್ರಿಕರು ಸೇಫ್ ಆಗಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ರಾಮನಗರ, ಚನ್ನಪಟ್ಟಣ, ಕನಕಪುರದಿಂದ ಯಾತ್ರಿಕರು ಜು.1 ರಂದು ಯಾತ್ರೆಗೆ ತೆರಳಿದ್ದರು. ಎಲ್ಲರೂ ವಿಮಾನದಲ್ಲಿ ಪ್ರಯಾಣ ಮಾಡಿದ್ದರು. ಶುಕ್ರವಾರ ಅಮರನಾಥನ ದರ್ಶನ ಪಡೆದ ಯಾತ್ರಿಕರು ವಾಪಸ್ಸು ಬರುತ್ತಿದ್ದ ವೇಳೆ ಅಮರನಾಥ ಗುಹೆಯ ಬಳಿ ಪ್ರಕೃತಿ ವಿಕೋಪ ಸಂಭವಿಸಿದ ಸುದ್ದಿ ಇವರಿಗೂ ತಲುಪಿದೆ. ಸಧ್ಯ ಜಿಲ್ಲೆಯ ಎಲ್ಲಾ ಯಾತ್ರಿಕರು ಬೇಸ್ ಗೆ ಹಿಂದಿರುಗಿದ್ದಾರೆ. ಇವರೆಲ್ಲ ಶ್ರೀನಗರಕ್ಕೆ ತೆರಳಲಿದ್ದಾರೆ.