ಜಿಲ್ಲೆಯಲ್ಲಿ 280 ಕೋವಿಡ್‍ ಸಕ್ರಿಯ ಪ್ರಕರಣ

* ಏ.12ರಂದು 61 ಹೊಸ ಪ್ರಕರಣ

* ಕೋವಿಡ್‍ ನಿಯಮಗಳು ಪಾಲಿಸಿ

* ಗಾಬರಿ ಬೇಡ, ಎಚ್ಚರವಹಿಸಿ

ರಾಮನಗರ, 12ನೇ ಏಪ್ರಿಲ್‍ 2021: ಜಿಲ್ಲೆಯಲ್ಲಿ ಕೋವಿಡ್ ಸೊಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಏಪ್ರಿಲ್‍ 12ರಂದು 280 ಸಕ್ರಿಯ ಪ್ರಕರಣಗಳು ಇರುವ ಬಗ್ಗೆ ಹಾಗೂ ರಾಮನಗರ ತಾಲೂಕಿನಲ್ಲಿ ಒಬ್ಬ ಸೋಂಕಿತನ ಸಾವು ಸಂಭವಿಸಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಏಪ್ರಿಲ್‍ 12ರ ಸೋಮವಾರ ಜಿಲ್ಲೆಯಲ್ಲಿ 61 ಹೊಸ ಪ್ರಕರಣ ಪತ್ರೆಯಾಗಿದೆ. ಚನ್ನಪಟ್ಟಣದಲ್ಲಿ 3, ಕನಕಪುರದಲ್ಲಿ 13, ಮಾಗಡಿಯಲ್ಲಿ 27 ಮತ್ತು ರಾಮನಗರದಲ್ಲಿ 18 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಅಂಕಿ ಅಂಶ ನೀಡಿದೆ.

ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು ಸಂಖ್ಯೆ 280ಕ್ಕೆ ಜಿಗಿದಿದೆ.  ಏಪ್ರಿಲ್‍ 12, 2021ರಂದು ಅನ್ವಯಿಸುವಂತೆ ಚನ್ನಪಟ್ಟಣ ತಾಲೂಕಿನಲ್ಲಿ 53 ಕನಕಪುರ ತಾಲೂಕಿನಲ್ಲಿ 58, ಮಾಗಡಿಯಲ್ಲಿ 93 ಮತ್ತು ರಾಮನಗರ ತಾಲೂಕಿನಲ್ಲಿ 76 ಸಕ್ರಿಯ ಪ್ರಕರಣಗಳಿವೆ. ಕಳೆದ ವರ್ಷ ಆರಂಭವಾದ ಸೋಂಕು ಇಲ್ಲಿಯವರೆಗೂ ಜಿಲ್ಲೆಯಲ್ಲಿ 8170 ಮಂದಿಯಲ್ಲಿ ಪತ್ತೆಯಾಗಿದೆ. ಇಲ್ಲಿಯವರೆಗೆ 7812 ಮಂದಿ ಗುಣಮುಖರಾಗಿದ್ದಾರೆ. 78 ಮಂದಿ ಮೃತಪಟ್ಟಿದ್ದಾರೆ.

ನಿಯಮ ಪಾಲಸಿ

ಮಾಸ್ಕ್ ಧರಿಸವುದು, ದೈಹಿಕ ಅಂತರ ಕಾಪಾಡಿ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ನಾಗರೀಕರಿಗೆ ಮನವಿ ಮಾಡಿದ್ದಾರೆ. ಕೋವಿಡ್‍ ಲಸಿಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿದ್ದು ಅರ್ಹವಯೋಮಾನದವರು ಪಡೆದುಕೊಳ್ಳುವಂತೆಯೂ ಅಧಿಕಾರಿಗಳು ಮನವಿ ಮಾಡಿದ್ದಾರೆ.

…………….