ರಾಮನಗರ, 29 ಜೂನ್, 2020: ಜಿಲ್ಲೆಯಲ್ಲಿ ಸೋಮವಾರ ಕೋವಿಡ್ 19 ಸೋಂಕು ಪರೀಕ್ಷೆಯ 36 ಫಲಿತಾಂಶಗಳು ಪ್ರಕಟವಾಗಿದ್ದು, ಎಲ್ಲ ನೆಗೆಟಿವ್ ಆಗಿದೆ. ಜಿಲ್ಲೆಯಲ್ಲಿ ಇಂದು 168 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇಲ್ಲಿಯವರೆಗೆ 8997 ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 7365 ಫಲಿತಾಂಶ ನೆಗೆಟಿವ್ಬಂದಿದೆ. ಕೇವಲ 150 ಮಾತ್ರ ಪಾಸಿಟಿವ್ ಫಲಿತಾಂಶ ಬಂದಿದೆ. ಪಾಸಿಟಿವ್ಪೈಕಿ 5 ಮಂದಿ ಮೃತ ಪಟ್ಟಿದ್ದು, ಇಂದು 27 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಹಿಂದುರಿಗಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 71 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ 19 ಆಸ್ಪತ್ರೆಯಲ್ಲಿ 47 ಮಂದಿ ಸೊಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ 19 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 2115 ಮಂದಿಯನ್ನು ಹೋಂ ಕ್ವಾರಂಟೈನ್ನಲ್ಲಿರಲು ಸೂಚಿಸಲಾಗಿದೆ. ಸಾಂಸ್ಥಿಕ ಕ್ವಾರಂಟೈನ್ನಲ್ಲಿ 411 ಮಂದಿ ಇದ್ದಾರೆ. 2826 ಮಂದಿ 14 ದಿನದ ಕ್ವಾರಂಟೈನ್ಪೂರ್ಣಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಇನ್ನು 1482 ಗಂಟಲು ದ್ರವದ ಮಾದರಿಗಳ ಫಲಿತಾಂಶ ಬರಬೇಕಾಗಿದೆ.
ತಾಲೂಕುವಾರು ವಿವರ:
ವಿವರ ಚನ್ನಪಟ್ಟಣ ಕನಕಪುರ ಮಾಗಡಿ ರಾಮನಗರ
ಪಾಸಿಟಿವ್ 30 55 39 26
ಗುಣಮುಖ 19 32 10 10
ಸಕ್ರಿಯ ಪ್ರಕರಣ 11 23 25 15
ಸಾವು 00 00 04 01
ಸಾಮಾಜಿಕ ಅಂತರ ಮರೆಯಬೇಡಿ, ಮಾಸ್ಕ್ ಧರಿಸುವುದನ್ನು ಬಿಡಬೇಡಿ.