ಫೆ.18ರಂದು ಕೆ.ಪಿ.ದೊಡ್ಡಿಯಲ್ಲಿ ಶಿವರಾತ್ರಿ ಕವಿಗೋಷ್ಠಿ.

ರಾಮನಗರ : ತಾಲ್ಲೂಕಿನ ಕೈಲಾಂಚ ಹೋಬಳಿಯ ಕೃಷ್ಣಾಪುರದೊಡ್ಡಿಯ ತಾನಿನಾ ರಂಗದಂಗಳದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಂದ ಶಿವರಾತ್ರಿ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಫೆ. 18 ರಂದು ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಸಾಹಿತಿ ಭೂಹಳ್ಳಿ ಪುಟ್ಟಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಜಿಲ್ಲಾ ಲೇಖಕರ ವೇದಿಕೆಯ ಅಧ್ಯಕ್ಷ ಕೂ.ಗಿ. ಗಿರಿಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಕವಿಗೋಷ್ಠಿಯಲ್ಲಿ ತಾ.ಸಿ. ತಿಮ್ಮಯ್ಯ, ಡಾ. ಬ್ಯಾಡರಹಳ್ಳಿ ಶಿವರಾಜು, ಡಾ. ದೇವರಾಜು, ಡಾ. ಸುನೀಲ್ ಕುಮಾರ್, ಪೂರ್ಣಿಮಾ ಹುಲುವಾಡಿ, ವಿಜಯ್ ಕುಮಾರ್, ವೆಂಕಟಗಿರಿ ರಾವುಗೊಡ್ಲು, ಎಸ್. ಶೋಭಾ, ಎನ್.ಎಂ. ಶಿವಲಿಂಗ ನಲ್ಲಹಳ್ಳಿ, ಎಸ್.ಎಲ್. ಲಕ್ಕಪ್ಪ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಉತ್ಸವದಲ್ಲಿ ಬೆಂಗಳೂರಿನ ಕಾವ್ಯರಾವ್ ಮತ್ತು ತಂಡದವರು ದೇವರ ನಾಮ, ಕನಕಪುರದ ಕೆ. ಶಿವರಾಮು ಮತ್ತು ತಂಡದವರು ಜಾನಪದ ಗೀತೆ, ಕನಕಪುರದ ಲಿಂಗರಾಜು ಮತ್ತು ತಂಡ ನೀಲಗಾರರ ಪದಗಳನ್ನು ಹಾಡಲಿದ್ದಾರೆ ಎಂದು ಶಾಂತಲಾ ಚಾರಿಟಬಲ್ ಟ್ರಸ್ಟಿನ ಸಂಸ್ಥಾಪಕ ಕಾರ್ಯದರ್ಶಿ ಕವಿತಾರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.