ದಲಿತರು, ಅಲ್ಪಸಂಖ್ಯಾತರು ಮನಸ್ಸು ಮಾಡಿದರೆ ರಾಜ್ಯಕ್ಕೆ ದಲಿತ ಸಿಎಂ – ಡಾ.ಜಿ.ಪರಮೇಶ್ವರ

ರಾಮನಗರ: ಹೋದೆಡೆಯಲೆಲ್ಲ ಮಾಧ್ಯಮ ಪ್ರತಿನಿಧಿಗಳು ದಲಿತ ಸಿ.ಎಂ ವಿಚಾರ ಕೆಣಕುತ್ತಿದ್ದಾರೆ. ಮಾಧ್ಯಮದವರು ದಲಿತರನ್ನು ಮುಖ್ಯ ಮಂತ್ರಿ ಮಾಡೋಕೆ ಆಗುತ್ತ? ಜನಸಂಖ್ಯೆಯ ಪೈಕಿ ಶೇ 24 ರಷ್ಟಿರುವ‌ ನೀವು (ಎಸ್ಸಿ, ಎಸ್ಟಿ ಮುಂತಾದ ಸಮುದಾಯದವರು) ಮನಸ್ಸು ಮಾಡಿದರೆ ಸಿಎಂ ಮಾಡ್ತೀರಿ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

ತಾಲೂಕಿನ ಶ್ಯಾನುಬೋಗನಹಳ್ಳಿಯಲ್ಲಿರುವ ಎಸ್.ವಿ.ಕನ್ವೆಂಷನ್ ಹಾಲ್‌ನಲ್ಲಿ ತಾಲೂಕಿನ ಕೂಟಗಲ್‍ ಹೋಬಳಿ ಹಾಗೂ ಬಿಳಗುಂಬ ಗ್ರಾಮಪಂಚಾಯ್ತಿಗಳ ಗ್ರಾಮಸ್ಥರು ಹಮ್ಮಿಕೊಂಡಿದ್ದ ಅಂಬೇಡ್ಕರ್ ಹಬ್ಬ 2022 ಹಾಗೂ ರಮಾಬಾಯಿ ಅಂಬೇಡ್ಕರ್ ಸ್ತ್ರಿಶಕ್ತಿ ಸ್ವಸಹಾಯ ಸಂಘಗಳ ಉದ್ಘಾಟನೆ ನೆರೆವೇರಿಸಿ ಅವರು ಮಾತನಾಡಿದರು.

ಅಲ್ಪಸಂಖ್ಯಾತರು ಮತ್ತು ದಲಿತರು ಒಟ್ಟುಗೂಡಿದರೆ ರಾಜಕೀಯದಲ್ಲಿ ಯಾವ ಬದಲಾವಣೆಯೂ ಸಾಧ್ಯ ಎಂದರು. ಮುಂಬರುವ ಚುನಾವಣೆಯಲ್ಲಿ ರಾಮನಗರ ವಿಧಾನ ಸಭಾ ಕ್ಷೇತ್ರಕ್ಕೆ ಇಕ್ಬಾಲ್ ಹುಸೇನ್ ಕಾಂಗ್ರೆಸ್ ಅಭ್ಯರ್ಥಿ ಅಂತ ಈಗಾಗಲೆ ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ದಲಿತ ಸಮುದಾಯಗಳ ಮತದಾರರು ಕಾಂಗ್ರೆಸ್‌ಗೆ ಮತ ಕೊಡಬೇಕು ಎಂದು ಪರಮೇಶ್ವರ ಅವರು ಮನವಿ ಮಾಡಿದರು.

……….