ರಾಮನಗರ, ಜೂ.20: ಬೆಂಗಳೂರಿನಲ್ಲಿ ಭಾನುವಾರ ನಡೆದ ಶ್ರೀ ವಾಸವಿ ಪೀಠಾರೋಹಣ ಮಹೋತ್ಸವ ಹಿನ್ನೆಲೆಯಲ್ಲಿ ರಾಮನಗರ ಮತ್ತು ಮಾಗಡಿಯಲ್ಲಿ ಆರ್ಯ ವೈಶ್ಯ ಸಮುದಾಯದವರು ವೃದ್ದಾಶ್ರಮಗಳಿಗೆ ಹಣ್ಣುಗಳು ಮತ್ತು ಬಡವರು, ನಿರ್ಗತಿಕರಿಗೆ ಸಿದ್ದಪಡಿಸಿದ ಆಹಾರ ವಿತರಿಸಿದರು.
ಆರ್ಯ ವೈಶ್ಯ ಕುಲಗುರುಗಳಾದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರು ಶ್ರೀ ವಾಸವಿ ಪೀಠಾರೋಹಣ ಮಾಡಿದ ಶುಭ ಸಂದರ್ಭಕ್ಕೆ ಕರ್ನಾಟಕ ಆರ್ಯ ವೈಶ್ಯ ಮಹಾಸಭೆ ನೀಡಿದ್ದ ಕರೆಯನ್ವಯ ಇಲ್ಲಿನ ಆರ್ಯ ವೈಶ್ಯ ಸಮುದಾಯದವರು ತಮ್ಮ ಸಂಘಟನೆಯ ಮೂಲಕ ನೂರಾರು ಮಂದಿ ನಿರ್ಗತಿಕರು, ಬಡವರು, ದಿನಗೂಲಿ ನೌಕರರು, ರಸ್ತೆ ಬದಿ ವ್ಯಾಪಾರಿಗಳಿಗೆ ಸಿದ್ದಪಡಿಸಿದ ಆಹಾರವನ್ನು ವಿತರಿಸಿದರು. ರಾಮನಗರದಲ್ಲಿ ವೃದ್ದಾಶ್ರಮಗಳಲ್ಲಿ ವಾಸ ಮಾಡುತ್ತಿರುವವರಿಗೆ ಹಣ್ಣುಗಳನ್ನು ವಿತರಿಸಿದರು.
ರಾಮನಗರ ಆರ್ಯ ವೈಶ್ಯ ಸಭಾದ ಕಾರ್ಯದರ್ಶಿ ಕೆ.ವಿ.ಉಮೇಶ್, ವಾಸವಿ ವಿದ್ಯಾನಿಕೇತನ ಟ್ರಸ್ಟ್ನ ಕೆ.ಎಸ್.ನಾಗಪ್ರದೀಪ್, ವಾಸವಿ ಯೂತ್ಸ್ ಫೋರಂ ಸದಸ್ಯರು ಮತ್ತು ಮಾಗಡಿಯ ಆರ್ಯ ವೈಶ್ಯಸಭಾದ ಅಧ್ಯಕ್ಷ ಎಸ್.ಜಿ.ರಮೇಶ್ ಗುಪ್ತ ಅವರ ನೇತೃತ್ವದಲ್ಲಿ ಆಹಾರ ಪೊಟ್ಟಣಗಳ ವಿತರಣಾ ಕಾರ್ಯ ನಡೆಯಿತು.
You must be logged in to post a comment.