ವೀರಶೈವ ಲಿಂಗಾಯಿತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ರಾಮನಗರ: ಕರ್ನಾಟಕ ರಾಜ್ಯ ವೀರ ಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಮನಗರ ಜಿಲ್ಲಾ ಮತ್ತು ಮಾಗಡಿ ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ಇದೇ ಆಗಸ್ಟ್ ತಿಂಗಳಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಾಗಾಗಿ  2022 ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ ಮತ್ತು ಪಿ.ಯೂ.ಸಿ ಪರೀಕ್ಷೆಯಲ್ಲಿ ಶೇ 90 ಮತ್ತು ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಜಿಲ್ಲೆಯ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಮಕ್ಕಳು ಅರ್ಜಿಯೊಂದಿಗೆ ಅಂಕಪಟ್ಟಿ, ಜಾತಿ ಪ್ರಮಾಣಪತ್ರ ಮತ್ತು ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಈ ಕೆಳಕಂಡ ಸಂಘದ ಪದಾಧಿಕಾರಿಗಳಿಗೆ ಸಲ್ಲಿಸುವಂತೆ ಆಯೋಜಕ ಸಂಘ ಮನವಿ ಮಾಡಿದೆ.

ರಾಮನಗರ ತಾಲೂಕು-ಚಿಕ್ಕಹೊನ್ನಯ್ಯ (ಮೊಬೈಲ್ -9902640521), ಮಾಗಡಿ ತಾಲೂಕು .ರೇಣುಕಾರಾಧ್ಯ( ಮೊಬೈಲ್ – 8105913087), ಚನ್ನಪಟ್ಟಣ ತಾಲ್ಲೂಕು-ನವೀನ್ (9945914153), ಕನಕಪುರ ತಾಲೂಕು- ರುದ್ರೇಶಯ್ಯ (ಮೊಬೈಲ್ -9663689989) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.31-07-2022.

…………