ಏ.10ರಂದು ಜಿಲ್ಲೆಯಲ್ಲಿ 216 ಕೋವಿಡ್‍ ಸಕ್ರಿಯ ಪ್ರಕರಣ

* ಕೋವಿಡ್‍ ನಿಯಮಗಳು ಪಾಲಿಸಿ

* ಗಾಬರಿ ಬೇಡ, ಎಚ್ಚರವಹಿಸಿ

ರಾಮನಗರ, 10ನೇ ಏಪ್ರಿಲ್‍ 2021: ಜಿಲ್ಲೆಯಲ್ಲಿ ಕೋವಿಡ್ ಸೊಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಏಪ್ರಿಲ್‍ 10ರ ಶನಿವಾರ ಜಿಲ್ಲೆಯಲ್ಲಿ 61 ಸೋಂಕು ಪ್ರಕರಣಗಳು ದೃಢಪಟ್ಟಿವೆ.

ಏಪ್ರಿಲ್‍ 10ರಂದು ಚನ್ನಪಟ್ಟಣದಲ್ಲಿ 16, ಕನಕಪುರದಲ್ಲಿ 9, ಮಾಗಡಿಯಲ್ಲಿ 23 ಮತ್ತು ರಾಮನಗರದಲ್ಲಿ 13 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಅಂಕಿ ಅಂಶ ನೀಡಿದೆ.

ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು ಸಂಖ್ಯೆ 216ಕ್ಕೆ ಜಿಗಿದಿದೆ.  ಏಪ್ರಿಲ್‍ 10, 2021ರಂದು ಅನ್ವಯಿಸುವಂತೆ ಚನ್ನಪಟ್ಟಣ ತಾಲೂಕಿನಲ್ಲಿ 45, ಕನಕಪುರ ತಾಲೂಕಿನಲ್ಲಿ 47, ಮಾಗಡಿಯಲ್ಲಿ 64 ಮತ್ತು ರಾಮನಗರ ತಾಲೂಕಿನಲ್ಲಿ 60 ಸಕ್ರಿಯ ಪ್ರಕರಣಗಳಿವೆ. ಕಳೆದ ವರ್ಷ ಆರಂಭವಾದ ಸೋಂಕು ಇಲ್ಲಿಯವರೆಗೂ ಜಿಲ್ಲೆಯಲ್ಲಿ 8069 ಮಂದಿಯಲ್ಲಿ ಪತ್ತೆಯಾಗಿದೆ. ಇಲ್ಲಿಯವರೆಗೆ 7776 ಮಂದಿ ಗುಣಮುಖರಾಗಿದ್ದಾರೆ. 77 ಮಂದಿ ಮೃತಪಟ್ಟಿದ್ದಾರೆ.

ನಿಯಮ ಪಾಲಸಿ

ಮಾಸ್ಕ್ ಧರಿಸವುದು, ದೈಹಿಕ ಅಂತರ ಕಾಪಾಡಿ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ನಾಗರೀಕರಿಗೆ ಮನವಿ ಮಾಡಿದ್ದಾರೆ. ಕೋವಿಡ್‍ ಲಸಿಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿದ್ದು ಅರ್ಹವಯೋಮಾನದವರು ಪಡೆದುಕೊಳ್ಳುವಂತೆಯೂ ಅಧಿಕಾರಿಗಳು ಮನವಿ ಮಾಡಿದ್ದಾರೆ.

…………….